ಕೆಂಬಕ್ಕಿ

ಈ ಇವನು
ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು
ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ
ಬರೀ ಬೋಳುಮರ; ಕಾಂಡವೆಲ್ಲ ಪೊಟರೆ
ಮೇಲೊಂದು ಎರವಲು ವರ್ಣತೆರೆ.
ಆದರೇನಂತೆ-
ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು
ಸದಾ ಷೇಕ್ಸ್‍ಪಿಯರ್ ವರ್ಡ್ಸ್‌ವರ್ತ್ ಶೆಲ್ಲಿಯ ಸಿಳ್ಳೆಹಾಕಿ
ಸಮಯಕ್ಕೆ ಸರಕಿರಲೆಂದು ಕಷ್ಟಪಟ್ಟು ಕಲಿತ ಅವರಿವರ
ಅರ್ಧಂಬರ್ಧ ವಚನ
ಗತಿಬಿಟ್ಟು ಶ್ರುತಿಗೆಟ್ಟು ಹರಿದ ತಂತಿಯನ್ನೇ ಗಂಟುಹಾಕಿ
ಕೊರೆವ ವೀಣಾವಾದನ.
ಈ ನೆಲದ ವಾಸನೆಗೆ ಮೂಗು ತೆಗೆಯುತ್ತೇನೆಂದು
ಬಾಯಿ ತೆಗೆದು
ಗಡಿಯಾಚೆ ಗಡಂಗಿನಲ್ಲೇ ಕಿವಿಯಿಟ್ಟು ಹರುಕು-
ಮರುಕು ಮುಕ್ಕಿದ್ದಕ್ಕೆ ಧ್ವನಿವರ್ಧಕ ಸಾಧನ.
ದೇಶಭಾಷಾ ಸಾಹಿತ್ಯ ಕಲೆಗಳಿಗೆ ಮಾತ್ರ ಕೋಶಕೋಶವನ್ನೆಲ್ಲ
ಪಚಪಚನೆ ಅರೆಬರೆ ಅಗಿದು ಉಗುಳುವ ಈ ಇವನು
ಮಿಕಿಮಿಕಿ ನೋಡಿದ ಆಂಗ್ಲ-ಅಮೇರಿಕನ್ನರ ಚರ್ಮ ಹೊದೆದ ಮಿಕ.

ಒಟ್ಟಿನಲ್ಲಿ ಹೇಳಬೇಕೆ ?
ಇದೊಂದು ರೆಡಿಮೇಡ್ ರಬ್ಬರ್ ಹಕ್ಕಿ
ಕೆಂಬಕ್ಕಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Bertolt Brecht, ಮತ್ತಾತನ ಎಪಿಕ್ ಥೇಟರ
Next post ಪ್ರೀತಿ ಸಂತಾನ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys